ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಅಂಕೋಲಾದಲ್ಲಿ ಬ್ಯಾನರ್ ಸಂಸ್ಕೃತಿಗೆ ಬ್ರೇಕ್: ಪುರಸಭೆಯ ಯುದ್ಧೋಪಾದಿ ಕಾರ್ಯಾಚರಣೆ!

Share News

ಅಂಕೋಲಾ: ದಿನಾಂಕ 10/04/2026.ಪುರಸಭೆಯ ಮಾರುಕಟ್ಟೆ ಪ್ರದೇಶದಲ್ಲಿ ಓಡಾಡುವ ಜನರಿಗೆ ಇಂದು ಒಂದು ಹೊಸ ನಿರಾಳತೆ ಸಿಕ್ಕಿದೆ. ರಸ್ತೆಯ ತಿರುವುಗಳಲ್ಲಿ ಕಣ್ಣು ಕುಕ್ಕುತ್ತಿದ್ದ, ವಾಹನ ಸವಾರರ ದೃಷ್ಟಿ ಮರೆಮಾಚುತ್ತಿದ್ದ ಆ ಬೃಹತ್ ಬ್ಯಾನರ್‌ಗಳ ದಂಡು ಇಂದು ಸದ್ದಿಲ್ಲದೆ ಮಾಯವಾಗಿದೆ! ಕಳೆದ ಕೆಲವು ದಿನಗಳಿಂದ ಅಮಾಯಕರ ರಕ್ತ ರಸ್ತೆಯ ಮೇಲೆ ಹರಿಯಲು ಕಾರಣವಾಗಿದ್ದ ಈ ‘ಬ್ಯಾನರ್ ಸಂಸ್ಕೃತಿ’ ವಿರುದ್ಧ ‘ವರದಿ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಸ್ಪಂದಿಸಿದ ಅಂಕೋಲಾ ಪುರಸಭೆ ಅಧಿಕಾರಿಗಳು, ಇಂದು ಬೆಳಿಗ್ಗೆ ದಿನಾಂಕ 10/04/2026ರಂದು 10ಗಂಟೆಗೆ ಅಂಕೋಲಾದ ಪ್ರಮುಖ ವೃತ್ತಗಳಲ್ಲಿ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ಅಪಾಯಕಾರಿ ಸ್ಥಳದಲ್ಲಿ ಹಾಕಿದ ಬ್ಯಾನರ್ ತೆರವುಗೊಳಿಸಿದ್ದಾರ.

ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಶ್ರೀ ಎಸು ಎಸ್ ಬೆಂಗಳೂರು ಅವರ ಖಡಕ್ ನಿರ್ದೇಶನದ ಮೇರೆಗೆ ಕಾರ್ಯಾಚರಣೆ ಶುರುವಾಯಿತು. ಕಂದಾಯ ಅಧಿಕಾರಿ ದಿಲೀಪ್ ನಾಯ್ಕ್ ಅವರು ತಮ್ಮ ಅಧೀನ ಸಿಬ್ಬಂದಿಗಳಿಗೆ ಸೂಕ್ತ ಸೂಚನೆಗಳನ್ನು ನೀಡುತ್ತಾ ತಂಡವನ್ನು ಮುನ್ನಡೆಸಿದರು.

ಅಂಕೋಲಾದ ಜೈ ಹಿಂದ್ ಹೈಸ್ಕೂಲ್ ಸರ್ಕಲ್‌ ವೃತ್ತ ಸೇರಿದಂತೆ . ವಿದ್ಯುತ್ ಕಂಬಗಳು ಹಾಗೂ ಮಾರುಕಟ್ಟೆಯ ಅಪಾಯಕಾರಿ ತಿರುವುಗಳಲ್ಲಿ ಹತ್ತಕ್ಕೂ ಹೆಚ್ಚು ಬೃಹತ್ ಬ್ಯಾನರ್‌ಗಳನ್ನು ಪುರಸಭೆ ಸಿಬ್ಬಂದಿ ಕಿತ್ತೆಸೆದಿದ್ದಾರೆ.

​ಈ ಕಾರ್ಯಾಚರಣೆಯ ಮುಂಚೂಣಿಯಲ್ಲಿದ್ದ ಪೌರಕಾರ್ಮಿಕ ಉಮಾಕಾಂತ್ ನಾಯ್ಕ್ ಮತ್ತು ಅವರ ತಂಡದವರು, ಪುರಸಭೆಯ ರಿಕ್ಷಾದಲ್ಲಿ ನಾಲ್ಕೈದು ಟ್ರಿಪ್ ಹೊಡೆದು ಬ್ಯಾನರ್‌ಗಳ ದಂಡನ್ನೇ ಸಾಗಿಸಿದ್ದಾರೆ. ಶಾಸಕರು ಸೇರಿದಂತೆ ಹಲವು ಗಣ್ಯರ ಭಾವಚಿತ್ರವಿದ್ದ ಫ್ಲೆಕ್ಸ್‌ಗಳನ್ನೂ ಸಹ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ಮೆರೆದಿದ್ದಾರೆ. ಜನರ ಜೀವ ರಕ್ಷಣೆಯೇ ನಮಗೆ ಮುಖ್ಯ ಎಂಬಂತೆ ಕಾರ್ಯನಿರ್ವಹಿಸಿದ ಅಧಿಕಾರಿಗಳ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

​ನಗರದಾದ್ಯಂತ ಇನ್ನೂ ಅನೇಕ ಬ್ಯಾನರ್‌ಗಳಿದ್ದು, ಅಧಿಕಾರಿಗಳು ಈಗ ಪ್ರತಿಯೊಂದರ ಅವಧಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅನುಮತಿ ಪಡೆದ ಬ್ಯಾನರ್‌ಗಳ ಕಾಲಮಿತಿ ಮುಗಿಯುತ್ತಿದ್ದಂತೆಯೇ ಅವುಗಳನ್ನು ಕೂಡ ತೆರವುಗೊಳಿಸಲು ಸಿದ್ಧತೆ ನಡೆಸಲಾಗಿದೆ. ಸದ್ಯ ವಶಪಡಿಸಿಕೊಂಡಿರುವ ಬ್ಯಾನರ್‌ಗಳ ಮಾಲೀಕರಿಗೆ ಭಾರೀ ಮೊತ್ತದ ದಂಡ ವಿಧಿಸಲು ನಿರ್ಧರಿಸಲಾಗಿದೆ. ಇನ್ನು ಮುಂದೆ ಅಂಕೋಲಾ ವ್ಯಾಪ್ತಿಯಲ್ಲಿ ಈ ಬ್ಯಾನರ್ ಸಂಸ್ಕೃತಿಗೆ ಶಾಶ್ವತವಾಗಿ ಕಡಿಯಾಣ ಹಾಕುವ ನಿಟ್ಟಿನಲ್ಲಿ ಪುರಸಭೆಯು ಕಟ್ಟುನಿಟ್ಟಾದ ಹೊಸ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದೆ. ಅಂಕೋಲಾದ ಪ್ರಜ್ಞಾವಂತ ಸಾರ್ವಜನಿಕರು ಇಂದು ಅಧಿಕಾರಿಗಳ ಈ ಕರ್ತವ್ಯ ಪ್ರಜ್ಞೆಗೆ ‘ಸಲಾಂ’ ಎನ್ನುತ್ತಿದ್ದಾರೆ. ಅಧಿಕಾರಿಗಳ ಈ ಇಚ್ಛಾಶಕ್ತಿ ಹೀಗೆಯೇ ಮುಂದುವರಿಯಲಿ ಎಂಬುದು ನಮ್ಮೆಲ್ಲರ ಆಶಯ.

*ವರದಿ:ಕಿರಣ ಪೊಲೀಸ್ ವಾರ್ತೆ.*


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!