ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜಕೀಯರಾಜ್ಯ ಸುದ್ದಿ

ಕೃಷ್ಣಾ ಮೇಲ್ದಂಡೆ ಯೋಜನೆ ಭೂಸಂತ್ರಸ್ತರಿಗೆ ಗುಡ್ ನ್ಯೂಸ್: ಏಪ್ರಿಲ್‌ನಿಂದ ಜುಲೈವರೆಗೆ ವಿಶೇಷ ‘ಲೋಕ ಅದಾಲತ್’

Share News

ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ (UKP) ತಮ್ಮ ಭೂಮಿ ನೀಡಿ, ನ್ಯಾಯಯುತ ಪರಿಹಾರಕ್ಕಾಗಿ ದಶಕಗಳಿಂದ ನ್ಯಾಯಾಲಯದ ಅಲೆದಾಟ ನಡೆಸುತ್ತಿರುವ ವಿಜಯಪುರ ಜಿಲ್ಲೆಯ ರೈತರಿಗೆ ರಾಜ್ಯ ಸರ್ಕಾರವು ಸುವರ್ಣ ಅವಕಾಶವೊಂದನ್ನು ಕಲ್ಪಿಸಿದೆ. ಏಪ್ರಿಲ್‌ನಿಂದ ಜುಲೈ ತಿಂಗಳವರೆಗೆ ವಿಶೇಷ ‘ಲೋಕ ಅದಾಲತ್’ ಹಮ್ಮಿಕೊಳ್ಳಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ಕರೆ ನೀಡಿದ್ದಾರೆ.

ಭೂಸ್ವಾಧೀನದ ಹೆಚ್ಚಿನ ಪರಿಹಾರಕ್ಕಾಗಿ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿ ಇರುವುದರಿಂದ ರೈತರು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಇದನ್ನು ಮನಗಂಡ ವಿಜಯಪುರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ವಿಶೇಷ ಲೋಕ ಅದಾಲತ್ ಆಯೋಜಿಸಿದೆ. ಇಲ್ಲಿ ಪರಸ್ಪರ ಒಪ್ಪಿಗೆಯೊಂದಿಗೆ ಕೇವಲ ಒಂದೇ ದಿನದಲ್ಲಿ ಸುದೀರ್ಘ ಕಾಲದ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ.

ಶೂನ್ಯ ಶುಲ್ಕ: ಯಾವುದೇ ವಕೀಲರ ಶುಲ್ಕ ಅಥವಾ ಕೋರ್ಟ್ ಶುಲ್ಕದ ಹೊರೆ ಇರುವುದಿಲ್ಲ.

​ತ್ವರಿತ ಇತ್ಯರ್ಥ: ಪರಸ್ಪರ ಮಾತುಕತೆಯ ಮೂಲಕ ಶೀಘ್ರವಾಗಿ ಪರಿಹಾರ ಕಂಡುಕೊಳ್ಳಬಹುದು.

​ಸ್ಥಳ: ವಿಜಯಪುರದ 1ನೇ ಹಾಗೂ 3ನೇ ಹೆಚ್ಚುವರಿ ನ್ಯಾಯಾಲಯಗಳಲ್ಲಿ ಈ ಪ್ರಕ್ರಿಯೆ ನಡೆಯಲಿದೆ.

​ಅದಾಲತ್ ನಡೆಯುವ ಸಮಯ:

ವಿಶೇಷ ಅದಾಲತ್‌ನಲ್ಲಿ ಪಾಲ್ಗೊಳ್ಳಲು ಆಸಕ್ತರಿಗಾಗಿ ಎರಡು ಹಂತಗಳಲ್ಲಿ ಸಮಯ ನಿಗದಿಪಡಿಸಲಾಗಿದೆ:

​ಏಪ್ರಿಲ್ ಮತ್ತು ಮೇ ತಿಂಗಳು: ಮಧ್ಯಾಹ್ನ 12.30 ರಿಂದ 1.30 ರವರೆಗೆ.

​ಜೂನ್ ಮತ್ತು ಜುಲೈ ತಿಂಗಳು: ಸಂಜೆ 4.45 ರಿಂದ 5.45 ರವರೆಗೆ.

ವರ್ಷಗಟ್ಟಲೆ ನ್ಯಾಯಾಲಯಗಳಲ್ಲಿ ಹೋರಾಟ ನಡೆಸುತ್ತಿರುವ ಭೂಸಂತ್ರಸ್ತ ರೈತರು ತಕ್ಷಣವೇ ಸಂಬಂಧಪಟ್ಟ ಭೂಸ್ವಾಧೀನ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆಯಬೇಕು. ಈ ಅವಕಾಶವನ್ನು ಬಳಸಿಕೊಂಡು ರೈತರು ತಮ್ಮ ಹಕ್ಕಿನ ಪರಿಹಾರವನ್ನು ಶೀಘ್ರವಾಗಿ ಪಡೆದು ನೆಮ್ಮದಿಯ ಜೀವನ ನಡೆಸಬೇಕು” ಎಂದು ಸಚಿವ ಎಂ.ಬಿ. ಪಾಟೀಲರು ತಿಳಿಸಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!