ರಾಜ್ಯ ಸುದ್ದಿಕ್ರೈಂ ಸುದ್ದಿಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಸ್ಥಳೀಯ ಸುದ್ದಿಗಳು

ಇನ್‌ಸ್ಟಾಗ್ರಾಮ್ ಪ್ರೀತಿಯ ನಂಬಿ ಮೋಸ ಹೋದ ಯುವತಿ: ಹಸುಗೂಸಿನೊಂದಿಗೆ ನ್ಯಾಯಕ್ಕಾಗಿ ಬೀದಿಗಿಳಿದ ತಾಯಿ

Share News

ಮೈಸೂರು: ಇನ್‌ಸ್ಟಾಗ್ರಾಮ್ ಪ್ರೀತಿ ಎಂಬ ಮಾಯದ ಜಾಲಕ್ಕೆ ಬಿದ್ದು ಇಡೀ ಬದುಕನ್ನೇ ಕಳೆದುಕೊಂಡು, ಹೆತ್ತ ಮಗುವಿನೊಂದಿಗೆ ಯುವತಿಯೊಬ್ಬಳು ನ್ಯಾಯಕ್ಕಾಗಿ ಬೀದಿಗೆ ಬಿದ್ದಿರುವ ಕರುಣಾಜನಕ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.

​ಗದಗ ಜಿಲ್ಲೆಯ ಮಹಾಲಿಂಗಪುರ ತಾಂಡಾ ಮೂಲದ ಸಿಂಧು ಎಂಬ ಯುವತಿಯೇ ಪ್ರೀತಿಯ ಹೆಸರಿನಲ್ಲಿ ವಂಚನೆಗೊಳಗಾದ ದುರ್ದೈವಿ. ಈಕೆ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಸೊಳ್ಳಾಪುರ ಗ್ರಾಮದ ರಾಕೇಶ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು.

ಸಿಂಧು ಮತ್ತು ರಾಕೇಶ್ ನಡುವೆ ಇನ್‌ಸ್ಟಾಗ್ರಾಮ್‌ನಲ್ಲಿ ಆರಂಭವಾದ ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು. ರಾಕೇಶ್‌ನನ್ನು ಗಾಢವಾಗಿ ನಂಬಿದ ಸಿಂಧು, ತನ್ನ ಹೆತ್ತವರು ಹಾಗೂ ಹುಟ್ಟೂರನ್ನು ಬಿಟ್ಟು ಮೈಸೂರಿಗೆ ಬಂದು ಆತನನ್ನು ವಿವಾಹವಾಗಿದ್ದಳು. ಇವರಿಬ್ಬರ ದಾಂಪತ್ಯ ಜೀವನದ ಪ್ರೀತಿಯ ಸಾಕ್ಷಿಯಾಗಿ ಒಂದು ಪುಟ್ಟ ಕಂದಮ್ಮ ಕೂಡ ಜನಿಸಿದೆ. ಆದರೆ, ಮಗು ಜನಿಸಿದ ಬೆನ್ನಲ್ಲೇ ಪತಿ ರಾಕೇಶ್ ಹಾಗೂ ಆತನ ಕುಟುಂಬಸ್ಥರು ಸಿಂಧು ಮತ್ತು ಆಕೆಯ ಹಸುಗೂಸನ್ನು ಮನೆಯಿಂದ ಹೊರದಬ್ಬಿ ಬೀದಿಪಾಲು ಮಾಡಿದ್ದಾರೆ.

ಪತಿಯ ಮನೆಯವರಿಂದ ತೀವ್ರ ಅನ್ಯಾಯ ಹಾಗೂ ವಂಚನೆಗೊಳಗಾದ ಸಿಂಧು, ಈಗ ಹಸುಗೂಸನ್ನು ಮಡಿಲಲ್ಲಿಟ್ಟುಕೊಂಡು ನ್ಯಾಯಕ್ಕಾಗಿ ಅಲೆಯುವಂತಾಗಿದೆ. ತನಗೆ ಮತ್ತು ತನ್ನ ಮಗುವಿಗೆ ನ್ಯಾಯ ಒದಗಿಸಿಕೊಡುವಂತೆ ಮೈಸೂರಿನ ಅಂಬೇಡ್ಕರ್ ಪ್ರತಿಮೆಯ ಎದುರು ಕಣ್ಣೀರು ಹಾಕುತ್ತಾ ಧರಣಿ ಕುಳಿತಿದ್ದಾಳೆ.

ತನ್ನ ಹಾಗೂ ಮಗುವಿನ ಭವಿಷ್ಯಕ್ಕಾಗಿ ಆಶ್ರಯ ಕಲ್ಪಿಸಿಕೊಡಬೇಕು ಮತ್ತು ತನಗೆ ವಂಚಿಸಿದ ಪತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೊಂದ ಮಹಿಳೆ ಈಗಾಗಲೇ ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರು ನೀಡಿದ್ದಾಳೆ.

​ಸಾಮಾಜಿಕ ಜಾಲತಾಣದ ಪ್ರೀತಿಯನ್ನು ನಂಬಿ ಬಂದು ಇಂತಹ ದುಸ್ಥಿತಿಗೆ ತಲುಪಿರುವ ಯುವತಿಯ ಸ್ಥಿತಿಯನ್ನು ಕಂಡು ಸಾರ್ವಜನಿಕರು ತೀವ್ರ ಮರುಕ ವ್ಯಕ್ತಪಡಿಸುತ್ತಿದ್ದಾರೆ. ಯುವತಿಗೆ ಮೋಸ ಮಾಡಿದ ಪತಿ ರಾಕೇಶ್ ಹಾಗೂ ಆತನ ಕುಟುಂಬಸ್ಥರಿಗೆ ಕಾನೂನು ರೀತ್ಯಾ ತಕ್ಕ ಶಿಕ್ಷೆಯಾಗಬೇಕು ಮತ್ತು ನೊಂದ ತಾಯಿ-ಮಗುವಿಗೆ ತಕ್ಷಣವೇ ನ್ಯಾಯ ಸಿಗಬೇಕು ಎಂದು ಸಾರ್ವಜನಿಕರು ತೀವ್ರವಾಗಿ ಆಗ್ರಹಿಸಿದ್ದಾರೆ.

 


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!