Crime Newsಕ್ರೈಂ ಸುದ್ದಿಜಿಲ್ಲಾ ಸುದ್ದಿರಾಜ್ಯ ಸುದ್ದಿ

ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ: ಎ.ಐ ಕ್ಯಾಮೆರಾ ನೆರವಿನಿಂದ 15 ದ್ವಿಚಕ್ರ ವಾಹನಗಳ ಜಪ್ತಿ, ಆರೋಪಿ ಬಂಧನ

Share News

ಬೀದರ್: ಜಿಲ್ಲೆಯಲ್ಲಿ ಸರಣಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಗಾಂಧಿಗಂಜ್ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಅಂದಾಜು 9,78,000/- ರೂ. ಮೌಲ್ಯದ ಒಟ್ಟು 15 ಹೀರೋ ಸ್ಪ್ಲೆಂಡರ್ ಪ್ಲಸ್ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಭಾಲ್ಕಿ ತಾಲ್ಲೂಕಿನ ಗಣೇಶಪುರವಾಡಿಯ ನಿವಾಸಿ ಶ್ರೀ ಗಣಪತಿ ಎಂಬುವವರು ಬೀದರ್‌ನ ಗಾಂಧಿಗಂಜ್ ಎ.ಪಿ.ಎಂ.ಸಿ ಮಾರ್ಕೆಟ್ ಬಳಿ ತಮ್ಮ ಮೋಟಾರ್ ಸೈಕಲ್ ನಿಲ್ಲಿಸಿ ಬೀಜ ಖರೀದಿಸಲು ಹೋಗಿದ್ದಾಗ ಕಳ್ಳತನವಾಗಿತ್ತು. ಈ ಕುರಿತು ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂ. 50/2026, ಕಲಂ 303(2) ಬಿ.ಎನ್.ಎಸ್-2023 ರಡಿ ಪ್ರಕರಣ ದಾಖಲಾಗಿತ್ತು.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಪ್ರದೀಪ ಗುಂಟಿ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀ ಚಂದ್ರಕಾಂತ ಪೂಜಾರಿ ಹಾಗೂ ಡಿವೈಎಸ್ಪಿ ಶ್ರೀ ದೂದಪೀರ ಹುಸೇನ್ ಸಾಬ್ ಮುಲ್ಲಾ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.

​ಪೊಲೀಸ್ ನಿರೀಕ್ಷಕ ಶ್ರೀ ಆನಂದರಾವ್ ಎಸ್.ಎನ್ ಮತ್ತು ಪಿಎಸ್‌ಐ ಶ್ರೀ ವಿದ್ಯಾವಾನ್ ಅವರ ನೇತೃತ್ವದ ತಂಡವು, ಜಿಲ್ಲೆಯ ಸಿಸಿಟಿವಿ ಕಮಾಂಡ್ & ಕಂಟ್ರೋಲ್ ಸೆಂಟರ್‌ನ ಎ.ಐ (AI) ಕ್ಯಾಮೆರಾಗಳ ದೃಶ್ಯಾವಳಿಗಳನ್ನು ವಿಶ್ಲೇಷಿಸಿ, ದಿನಾಂಕ 19/03/2026 ರಂದು ಆರೋಪಿಯನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದೆ.

ಆರೋಪಿಯ ವಿಚಾರಣೆಯಿಂದ ಬೀದರ್ ನಗರದ ವಿವಿಧೆಡೆ ಕಳವು ಮಾಡಲಾಗಿದ್ದ 14 ವಾಹನಗಳು ಹಾಗೂ ಹುಮನಾಬಾದ್‌ನಲ್ಲಿ ಕಳವು ಮಾಡಲಾಗಿದ್ದ 1 ವಾಹನ ಸೇರಿದಂತೆ ಒಟ್ಟು 15 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಪ್ರಸ್ತುತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

​ವಾಹನ ಮಾಲೀಕರಿಗೆ ಸೂಚನೆ: > ಕಳೆದುಹೋದ ವಾಹನಗಳ ಮಾಲೀಕರು ಸೂಕ್ತ ದಾಖಲಾತಿಗಳೊಂದಿಗೆ ಗಾಂಧಿಗಂಜ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ, ಕಾನೂನು ಪ್ರಕ್ರಿಯೆಯಂತೆ ತಮ್ಮ ವಾಹನಗಳನ್ನು ಪಡೆದುಕೊಳ್ಳಲು ಸೂಚಿಸಲಾಗಿದೆ.

ಅತ್ಯಂತ ಚಾಕಚಕ್ಯತೆಯಿಂದ ಕಾರ್ಯಾಚರಣೆ ನಡೆಸಿದ ನವೀನ್ (910), ಅನೀಲ್ (520), ಇರ್ಫಾನ್ (1731), ಗಂಗಾಧರ (1953), ಸುಧಾಕರ (2074), ಹರ್ಷವರ್ಧನ್ (82) ಮತ್ತು ತುಕ್ಕಾರೆಡ್ಡಿ (779) ಅವರನ್ನೊಳಗೊಂಡ ತಂಡದ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!