ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜಕೀಯರಾಜ್ಯ ಸುದ್ದಿ

ನೀರಾವರಿ ಸಲಹಾ ಸಮಿತಿ ಸಭೆ ಕರೆದು ಕಾಲುವೆಗಳಿಗೆ ನೀರು ಹರಿಸಿ: ಸರ್ಕಾರಕ್ಕೆ ಚಂದ್ರಶೇಖರಗೌಡ ಮಾಗನೂರ ಆಗ್ರಹ

Share News

ಯಾದಗಿರಿ: ನಾರಾಯಣಪುರ (ಬಸವಸಾಗರ) ಜಲಾಶಯದಿಂದ ಕೃಷ್ಣಾ ನದಿಗೆ ಸಾವಿರಾರು ಕ್ಯೂಸೆಕ್ ನೀರು ಹರಿಸುತ್ತಿರುವ ಸರ್ಕಾರ, ತಕ್ಷಣವೇ ಕೃಷ್ಣಾ ಮೇಲ್ದಂಡೆ ಯೋಜನೆಯ (UKP) ಕಾಲುವೆಗಳಿಗೂ ನೀರು ಹರಿಸಿ ರೈತರ ಬೆಳೆಗಳನ್ನು ರಕ್ಷಿಸಬೇಕು ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಒತ್ತಾಯಿಸಿದ್ದಾರೆ.

​ಬೆಳೆ ಹಾನಿ ಭೀತಿ: ಜಿಲ್ಲೆಯಲ್ಲಿ ಸೂಕ್ತ ಮಳೆಯಾಗದ ಕಾರಣ ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿದ್ದು, ಈಗಾಗಲೇ ಶೇ.50 ರಷ್ಟು ಬೆಳೆ ಹಾನಿಯಾಗಿದೆ. ಉಳಿದ ಶೇ.50 ರಷ್ಟು ಬೆಳೆ ರಕ್ಷಿಸಲು ಕಾಲುವೆಗೆ ನೀರು ಹರಿಸುವುದು ಅತ್ಯಗತ್ಯ.

​ಜಲಾಶಯ ಭರ್ತಿ: ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಡ್ಯಾಂ ಬಹುತೇಕ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದೆ. ನೀರಿನ ಅಭಾವವಿಲ್ಲದಿರುವುದರಿಂದ ಸರ್ಕಾರ ವಿಳಂಬ ಮಾಡದೇ ತಕ್ಷಣವೇ ನೀರಾವರಿ ಸಲಹಾ ಸಮಿತಿ (ICC) ಸಭೆ ಕರೆಯಬೇಕು.

​ಸರ್ಕಾರಕ್ಕೆ ಎಚ್ಚರಿಕೆ: ಸಾಲ ಮಾಡಿ ಬೀಜ, ಗೊಬ್ಬರ ಹಾಕಿರುವ ರೈತರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿ. ಕಾಲುವೆಗಳಿಗೆ ನೀರು ಹರಿಸಲು ಮತ್ತಷ್ಟು ವಿಳಂಬ ಮಾಡಿ ಬೆಳೆ ಸಂಪೂರ್ಣ ನಾಶವಾದರೆ, ಅದಕ್ಕೆ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳೇ ನೇರ ಹೊಣೆಯಾಗಲಿದ್ದಾರೆ ಎಂದು ಮಾಗನೂರ ಎಚ್ಚರಿಸಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!