ರಾಜ್ಯ ಸುದ್ದಿತಾಲೂಕುಸ್ಥಳೀಯ ಸುದ್ದಿಗಳು

ಹಿಂದಿ ಕಡ್ಡಾಯ ಬೇಡ, ಕನ್ನಡಿಗರಿಗೆ ಅನ್ಯಾಯ ಮಾಡಬೇಡಿ”: ಮಾ.11ಕ್ಕೆ ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಮುತ್ತಿಗೆ!

Share News

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 100 ಅಂಕಗಳ ಹಿಂದಿ ಭಾಷಾ ಪರೀಕ್ಷೆಯನ್ನು ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ದೊಡ್ಡಬಳ್ಳಾಪುರದ ಕನ್ನಡಪರ ಸಂಘಟನೆಗಳು ಆರ್ಭಟಿಸಿವೆ. ‘ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಒಕ್ಕೂಟ’ ನೀಡಿರುವ ಕರೆಗೆ ಓಗೊಟ್ಟು, ಮಾಚ್ 11ರಂದು ತಾಲ್ಲೂಕು ಕಚೇರಿಗೆ ಬೃಹತ್ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ.

ಹೋರಾಟಗಾರರ ಆಕ್ರೋಶಕ್ಕೆ ಕಾರಣಗಳೇನು?

ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ತುರ್ತು ಸಭೆಯಲ್ಲಿ ಮುಖಂಡರು ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ:

ಶೈಕ್ಷಣಿಕ ಹಿನ್ನಡೆ: ಬಲವಂತದ ಹಿಂದಿ ಕಲಿಕೆಯಿಂದ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕೊಡಲಿ ಪೆಟ್ಟು ಬೀಳುತ್ತಿದೆ.

ಅನುತ್ತೀರ್ಣರ ಸಂಖ್ಯೆ ಭೀತಿ: 2025ರ ಸಾಲಿನಲ್ಲಿ ಸುಮಾರು 1.42 ಲಕ್ಷ ವಿದ್ಯಾರ್ಥಿಗಳು ಕೇವಲ ಹಿಂದಿ ಭಾಷೆಯಲ್ಲಿ ಅನುತ್ತೀರ್ಣರಾಗುವಂತೆ ಮಾಡುವ ಮೂಲಕ ರಾಜ್ಯ ಸರ್ಕಾರವು ಕೇಂದ್ರದ ‘ಭಾಷಾ ದೌರ್ಜನ್ಯ’ಕ್ಕೆ ಕೈಜೋಡಿಸಿದೆ ಎಂಬುದು ಇವರ ಆರೋಪ.

ತಪ್ಪು ಮಾಹಿತಿ: ಪಠ್ಯಕ್ರಮದಲ್ಲಿ ಹಿಂದಿಯನ್ನು ‘ರಾಷ್ಟ್ರ ಭಾಷೆ’ ಎಂದು ಬಿಂಬಿಸುತ್ತಿರುವುದನ್ನು ತಕ್ಷಣವೇ ಕೈಬಿಡಬೇಕು ಎಂದು ಒತ್ತಾಯಿಸಲಾಗಿದೆ.

ಹೋರಾಟದ ಮುಂದಿನ ಹಾದಿ ಮತ್ತು ಎಚ್ಚರಿಕೆ

ಸಭೆಯಲ್ಲಿ ಕೈಗೊಂಡ ಪ್ರಮುಖ ತೀರ್ಮಾನಗಳು ಇಲ್ಲಿವೆ: ಮಾರ್ಚ್ 11 ಬೆಳಗ್ಗೆ 11 ಗಂಟೆಗೆ ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಮುತ್ತಿಗೆ.

ಮಾರ್ಚ್ 30 ಸರ್ಕಾರ “Pass Without Hindi” ನಿಯಮ ಜಾರಿ ಮಾಡದಿದ್ದರೆ, ಪರೀಕ್ಷಾ ಕೇಂದ್ರಗಳಿಗೆ ನುಗ್ಗಿ ಪ್ರತಿಭಟನೆ.

ಈ ಹೋರಾಟಕ್ಕೆ ಕೇವಲ ಕನ್ನಡಪರ ಸಂಘಟನೆಗಳಷ್ಟೇ ಅಲ್ಲದೆ, ದಲಿತ, ರೈತ ಹಾಗೂ ವಿದ್ಯಾರ್ಥಿ ಸಂಘಟನೆಗಳು ಸಾಥ್ ನೀಡಿವೆ. ಸಭೆಯಲ್ಲಿ ನಗರಸಭಾ ಸದಸ್ಯ ತ.ನ.ಪ್ರಭುದೇವ್, ಸಂಜೀವ ನಾಯಕ, ಮುನಿಪಾಪಯ್ಯ, ರಾಜಘಟ್ಟ ರವಿ ಸೇರಿದಂತೆ ಹತ್ತಾರು ಮುಖಂಡರು ಭಾಗವಹಿಸಿ, ಕನ್ನಡದ ಅಸ್ಮಿತೆಗಾಗಿ ಹೋರಾಡುವ ಪ್ರತಿಜ್ಞೆ ಮಾಡಿದರು.

ಪ್ರಮುಖ ಬೇಡಿಕೆ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಿಂದಿ ಅಂಕಗಳನ್ನು ಕಡ್ಡಾಯಗೊಳಿಸಬಾರದು ಮತ್ತು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಬಾರದು.

ವರದಿ :- ಆಂಟೋನಿ ಪತ್ರಕರ್ತ 


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!